ಪ್ರಶ್ನೆ
ಮನದೊಳಗೆ ಮೂಡಿ ನವಿರಾದ ಕಾವ್ಯ
ಕ್ಷಣ ಕಳೆವುದರೊಳಗೆ ಗೋಜಲು
ಬರಿ ಶಬ್ದಗಳ ತಾಕಲಾಟ, ಅರ್ಥವಾಗದೆ ಜಟಿಲ.
ಏಕೆ ಹೀಗೆ? ಬರಿಯ ಪ್ರಶ್ನೆ!
ಅಂದೆಂದೋ ತಂಗಾಳಿಗೆದುರಾಗಿ ಕುಳಿತಂದು,
ನೂರು ಭಾವಗಳ ಮೂಡಿಸಿದ ಚಂದ್ರ !
ಇಂದು ಭಾವಚಂದ್ರನ ಮೇಲೆ ಮುಸುಗೆಳೆದ ಮೋಡ.
ಏಕೆ ಹೀಗೆ? ನಿರ್ಭಾವ- ? ಮನ ಪ್ರಶ್ನಿಸುತ್ತಿದೆ, ನಿರುತ್ತರ.
ಮುಂಜಾವಿನ ಹಕ್ಕಿಗಳ ಚಿಲಿಪಿಲಿಗಳಂತೆ
ಚಟಪಟನೆ ಬಂದ ನೂರು ಭಾವ!
ಹೋಯಿತೆಲ್ಲಿಗೆ? ಪ್ರಶ್ನಿಸುತ್ತಿದೆ ಮನ.
ಬರಿ ಗಲಿಬಿಲಿ! ನಿರುತ್ತರ.
ಕ್ಷಣ ಕಳೆವುದರೊಳಗೆ ಗೋಜಲು
ಬರಿ ಶಬ್ದಗಳ ತಾಕಲಾಟ, ಅರ್ಥವಾಗದೆ ಜಟಿಲ.
ಏಕೆ ಹೀಗೆ? ಬರಿಯ ಪ್ರಶ್ನೆ!
ಅಂದೆಂದೋ ತಂಗಾಳಿಗೆದುರಾಗಿ ಕುಳಿತಂದು,
ನೂರು ಭಾವಗಳ ಮೂಡಿಸಿದ ಚಂದ್ರ !
ಇಂದು ಭಾವಚಂದ್ರನ ಮೇಲೆ ಮುಸುಗೆಳೆದ ಮೋಡ.
ಏಕೆ ಹೀಗೆ? ನಿರ್ಭಾವ- ? ಮನ ಪ್ರಶ್ನಿಸುತ್ತಿದೆ, ನಿರುತ್ತರ.
ಮುಂಜಾವಿನ ಹಕ್ಕಿಗಳ ಚಿಲಿಪಿಲಿಗಳಂತೆ
ಚಟಪಟನೆ ಬಂದ ನೂರು ಭಾವ!
ಹೋಯಿತೆಲ್ಲಿಗೆ? ಪ್ರಶ್ನಿಸುತ್ತಿದೆ ಮನ.
ಬರಿ ಗಲಿಬಿಲಿ! ನಿರುತ್ತರ.

5 Comments:
At 10:41 AM,
Deep said…
congrats madam :-)
At 11:22 PM,
mavinayanasa said…
ನಿರುತ್ತರ ಓದಿ ಪ್ರತಿಕ್ರಿಯಿಸಲು ನಿರುತ್ತರನಾಗಿರುವೆ. ವ್ಯಕ್ತಪಡಿಸಲಾಗದ ಭಾವನೆಗಳ ಸುಂದರ ನಿರೂಪಣೆ.
ಕಾವ್ಯ ಕೃಷಿ ಹೀಗೆಯೇ ಮುಂದುವರೆಯಲಿ.
At 12:04 AM,
Saraswathi Nataraj said…
ಭಾವಬಿಂದುವಿಗೆ ಸುಸ್ವಾಗತ. ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
At 1:30 AM,
ಮನಸ್ವಿನಿ said…
ಚೆನ್ನಾಗಿದೆ ಕವನ
At 7:07 AM,
Saraswathi Nataraj said…
ಧನ್ಯವಾದಗಳು ಮನಸ್ವಿನಿಯವರೆ....
Post a Comment
<< Home