ಭಾವ ಬಿಂದು

Sunday, June 10, 2007

ಎಲ್ಲೋ ಕಳೆದುಹೋಯಿತೆಂದ ಭಾವ ಮನಸ್ಸಿನೊಳಗೆ ಬೆಚ್ಚಗೆ ಹುದುಗಿರುತ್ತದೆ. ಕಳೆದು ಹೋದ ಸಂಬಂದಗಳು ಮತ್ತೆ ಬಂದಗಳಾಗುತ್ತವೆ. ಆಡಲಾರದ ಮಾತುಗಳು ಒಳಗೇ ಹುದುಗಿಬಿಡುತ್ತದೆ. ದುಡುಕಿ ಆಡಿದ ಮಾತುಗಳು ಮನವನ್ನು ಚುಚ್ಚುತ್ತಿರುತ್ತವೆ. ಯಾವುದೋ ಇಗೋ ಇಡಿಯ ಸಂಸಾರದ ಸಾಮರಸ್ಯವನ್ನೆ ಕದಡುತ್ತವೆ.
ಈ ಕೆಲವು ದಿನಗಳು ಅವವೇ ಯೋಚನೆಗಳು ಪುನ: ಪುನ: ಮನಸ್ಸಿನಲ್ಲಿ ಮೂಡುತ್ತಿವೆ. ಸುತ್ತ ನೋಡುತ್ತಿದ್ದರೆ ಸುಖವಾಗಿರುವ ವ್ಯಕ್ತಿಗಳನ್ನು ಭೂತಕನ್ನಡಿಯಿಂದ ಹುಡುಕಬೇಕಾಗಿದೆ. ಒಂದೊಂದು ಸಂಸಾರ್ದಲ್ಲಿ ಒಂದೊಂದು ಸಮಸ್ಯೆ.
ಕೆಲವು ವಿಥಿಯು ತಂದೊಡ್ಡಿದ್ದು. ಕೆಲವು ತಾವಾಗೇ ತಂದುಕೊಂಡಿದ್ದು. ಕೆಲವು ಒಬ್ಬರ ತಪ್ಪುಗಳಿಂದ ಇಡಿಯ ಸಂಸಾರ ನೋವುಗಳನ್ನು ಅನುಭವಿಸುವುದು. ಇನ್ನು ಕೆಲವರು ಸಮಸ್ಯೆಯಲ್ಲದ ಸಮಸ್ಯೆಗಳನ್ನು ಹುಟ್ಟು ಹಾಕಿಕೊಳ್ಳುವುದು.
ಆದರೂ ಯಾವಾಗಲೂ ಅನ್ನಿಸುತ್ತೆ. ಬೇರೆಯವರ ಸಮಸ್ಯೆಗಳ್ನ್ನು ತಲೆಗೆ ಹಾಕಿಕೊಳ್ಳದೆ ಇರಲು ಸಾಥ್ಯವೇ ಇಲ್ಲ .
ಆದ್ರೂ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಎಶ್ಟು ಸುಲಭ ಸೂತ್ರಗಳಿವೆ.
ಒಂದು ನಲ್ಮೆಯ ಮಾತು
ಒಂದು ಮುಗುಳ್ನಗು,
ಮನವನರಳಿಸುವ
ಒಂದು ಬೆಚ್ಚನೆ ಸ್ಪರ್ಶ
ಕಣ್ಣೀರೊರೆಸುವ
ಒಂದು ಸಾಂತ್ವನದ ನುದಿ
ನೂರು ಕ್ಸಮೆಗಳ ನೀವ
ಒಂದು ಪಶ್ಚಾತಾಪ.
ಹೊಸಭಾವ ಚಿಗುರಿಸುವ
ಒಂದು ಭಾವನಿವೇದನೆ,
ಬಿದ್ದವರನೆತ್ತಲು
ಒಂದು ಸಹಾಯಹಸ್ತ,
ತೆರೆದ ಮನ ತೆರೆದ ಮಾತು
ಮತ್ತೆಲ್ಲಿದೆ ವಿಷಾದಕೆ ತಾವು?

2 Comments:

  • At 11:15 PM, Blogger Unknown said…

    I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.

     
  • At 2:22 AM, Blogger ಜಾತ್ರೆ said…

    Registration- Seminar on the occasion of kannadasaahithya.com 8th year Celebration

    ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

    ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
    ವಿಷಯ:
    ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

    ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

    http://saadhaara.com/events/index/english

    http://saadhaara.com/events/index/kannada
    ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

    ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

    ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

    -ಕನ್ನಡಸಾಹಿತ್ಯ.ಕಾಂ ಬಳಗ

     

Post a Comment

<< Home